ಗುರುವಾರ, ಮಾರ್ಚ್ 19, 2009

ಶವ ಸಂಸ್ಕಾರದಲ್ಲಿ ಮಿತವ್ಯಯ. ಭಾಗ ೩

ಸಾಧಾರಣವಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅ೦ತ್ಯಸಮ್ಸ್ಕಾರಕ್ಕೆ೦ದು ಬ್ಯಾಂಕಿನ ಖಾತೆಯೊಂದರಲ್ಲಿ ೮೦೦೦ ಡಾಲರುಗಳನ್ನು ಜಮ ಮಾಡುವ ಪದ್ದತಿ ಇಲ್ಲಿ ಬಳಕೆಯಲ್ಲಿದ್ದು, ಈಗ ಅದಕ್ಕೂ ಚ್ಯುತಿ ಬಂದಿದೆ. ಈಗಿನ ಆರ್ಥಿಕ ದುರವಸ್ಥೆಯಲ್ಲಿ ಕೆಲಸ ಕೆದುಕೊ೦ಡಾಗ ಈ ಹಣ ಸಹಾಯಕ್ಕೆ ಬರಬಹುದೆ೦ದೂ ಸಹ ಜನ ಯೋಚಿಸುವ೦ತಾಗಿದೆ.
ಇಲ್ಲಿನ ಜನ ಸ್ಮಶಾನಕ್ಕೆ ಆಗಾಗ್ಯೆ ಹೋಗಿ ತಮ್ಮ ರಕ್ತಸಂಬಂಧಿಗಳ ಸಮಾದಿಯ ದರ್ಶನ ಮಾಡುವು ಹವ್ಯಾಸವಿದ್ದು, ಈಗ ಅಂತಹ ಕಾರ್ಯಕ್ರಮವನ್ನು ಸಹ ತಳ್ಳಿ ಹಾಕುತಿದ್ದಾರೆ. ಮುಂಚಿನಂತೆ ಸ್ಮಶಾನದಲ್ಲಿ ಜಾಗವನ್ನು ಕಾದಿರಿಸುವ ಪದ್ದತಿಗೆ ತಿಲಾಂಜಲಿ ನೀಡಲಾಗುತ್ತಿದೆ. ಆರ್ಥಿಕ ಪರಿಸ್ಥಿತಿಯ ಒತ್ತಡ ವರ್ಜಿನಿಯಾದ ಅಬಿನ್ಗ್ದನ್ ಎಂಬಲ್ಲಿನ ಹಿಲ್ಲ್ಸ್ ಮೆಮೋರಿಯಲ್ ಪಾರ್ಕ್ನಲ್ಲಿ ಮರಣೋತ್ತರ ಸಂಸ್ಕಾರಕ್ಕೆ ಶೇಕಡ ೬೦ ರಷ್ಟು ಬೇಡಿಕೆ ಕುಗ್ಗಿದೆಯೆಂದು ಇಲ್ಲಿ ಹೇಳಲಾಗುತ್ತಿದೆ. ಶವ ಸಂಸ್ಕಾರ ನೆರವೇರಿಸುವ ಸಂಸ್ಥೆಯೊಂದು ಅ೦ತ್ಯಸಮ್ಸ್ಕಾರದಲ್ಲಿನ ಹಲವು ಸಂಪ್ರದಾಯಗಳನ್ನು ಪರಿಸ್ಥಿತಿಗನುಗುಣವಾಗಿ ಕೈ ಬಿಡಬೇಕಾಗಿ ಬರುವುದರಿಂದ ದೇವರಲ್ಲಿ ಕ್ಸಮೆಬೇಡಿ ಕಾರ್ಯ ಪ್ರವೃತ್ತರಗುತ್ತಿದ್ದಾರೆಂದು ಹೇಳಲಾಗುತ್ತಿದೆ.
ಒಟ್ಟಾರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನು ೧೫ ವರ್ಷಗಳಲ್ಲಿ , ಇಲ್ಲಿನ ಜನರು ಮರಣೋತ್ತರ ವಿಚಾರವಾಗಿ ಯಾವುದೇ ಯೋಜನಯನ್ನು ಜಾರಿಗೆ ತರದೇ ಸಾವನ್ನಪ್ಪಬಹುದು ಎಂಬ ಅಭಿಪ್ರಾಯವು ಸಹ ಮೂಡಿಬಂದಿದೆ.

ಬುಧವಾರ, ಮಾರ್ಚ್ 18, 2009

ಮಿತ ವ್ಯಯದ ಶವಸಂಸ್ಕಾರ ಭಾಗ ೨

ಈ ಖಾಸಗಿ ಅ೦ಡರ್ತೇಕಿ೦ಗ ಸಂಸ್ಥೆಗಳ ಕೆಲಸವೇನೆ೦ದರೆ, ಒಬ್ಬ ವ್ಯಕ್ತಿಯು ಮರಣ ಹೊ೦ದಿದಾಗ, ಆ ಜಾಗಕ್ಕೆ ಶವಪೆಟ್ಟಿಗೆಯನ್ನು ಒಯಿದು ಪೆಟ್ಟಿಗೆಯಲ್ಲಿ ಶವವನ್ನು ಅಡಗಿಸಿ ಅಲ್ಲಿ೦ದ ಅದನ್ನು ಸಂಬಂಧಪಟ್ಟ ಇಗರ್ಜಿಗೆ ಸಾಗಿಸುವುದು, ನ೦ತರದಲ್ಲಿ ಕೊನೆಯ ಹಂತದಲ್ಲಿ ಶವಪೆಟ್ಟಿಗೆಗೆ ಮೊಳೆ ಬಡಿಯುವುದು,ಮತ್ತು ಈ ಮೊದಲೇ ಸಿದ್ಧ ಪಡಿಸಿರುವ ಹೊನ್ಡದೊಳಕ್ಕೆ ಅದನ್ನು ಇಳಿಸುವುದು ಇತ್ಯಾದಿ
ಇವೆಲ್ಲಕ್ಕೂ ೭೫೦೦ ರಿಂದ ೮೦೦೦ ಡಾಲರುಗಳು ಖರ್ಚಾಗಲಿದ್ದು, ಈಗಿನ ಆರ್ಥಿಕ ಬಿಕ್ಕಟ್ಟು ,ಈ ಮೊತ್ತದ ಹಣವನ್ನು ಭರಿಸುವಲ್ಲಿ ಹಿಂದು ಮುಂದು ನೋಡುವಂತಾಗಿ, ವಿಧಿಯಿಲ್ಲದೆ ಮಿತವ್ಯಯದ ಹಾದಿಯನ್ನು ಹಿಡಿಯುವ೦ತಾಗಿದೆ. ಅದಕ್ಕೆ೦ದೆ ಕೆಲವು ಸಂಸ್ಥೆಗಳು ಅಂತ್ಯಕ್ರಿಯೆಯ ತಮ್ಮ ದರವನ್ನು ಇಳಿಸಿ ಜನರನ್ನು ಆಕರ್ಷಿಸ ಹೊರಟಿವೆ. ಅದೆಂದರೆ ಸಾಧಾರಣವಾದ ಮರದ ಪೆಟ್ಟಿಗೆಯ ತಯಾರಿಕೆ,ಶವವನ್ನು ಅಂತ್ಯ ವಿಧಿಗೆ ಚರ್ಚುಗಳಿಗೆ ಸಾಗಿಸುವಲ್ಲಿ ಕಡಿಮೆ ವಾಹನಗಳ ಬಳಕೆ ,ಇಗರ್ಜಿಯಿ೦ದ ಸ್ಮಶಾನಕ್ಕೆ ಮೃತರ ಬಂಧುಗಳಿಗೆ ಏರ್ಪಡಿಸಲಾಗುತ್ತಿದ್ದ ವಿಶೇಷ ವಾಹನ ಸೌಲಭ್ಯಗಳ ಕಡಿತ, ಮುಂತಾದುವುಗಲಾದರೆ ಮೃತರ ಸಂಬಂಧಿಗಳ ಮಿತವ್ಯದ ಪರಿ ಈ ರೀತಿ ಇದೆ. ಹಲವರು ಶವವನ್ನು ಹೂಳಲು ಜಾಗಕ್ಕೆ ಹಣ ನೀಡಲು ಸಾಧ್ಯವಾಗದೇ, ಸುಡುವ ಪದ್ದತಿಗೆ ಅನಿವಾರ್ಯವಾಗಿ ಒಳಪಡುತ್ತಿದ್ದಾರೆ. ಸುಡುವ ಪದ್ದತಿಗೆ ಇಗರ್ಜಿಗಳ ವಿರೋಧವಿದ್ದರೂ ಸಹ ಈಗಿನ ಪರಿಸ್ಥಿತಿಗನುಗುಣವಾಗಿ ಅಂತಿಮ ಸನ್ಸ್ಕಾರಕ್ಕೆ ನಿರ್ದೇಶಕರು ಈ ಪದ್ದತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬಂಧುಗಳ ದರ್ಶನಕ್ಕಾಗಿ ಶವಗಳನ್ನು ಹಲವಾರು ದಿನ ಕಾಪಾಡುವಲ್ಲಿ ಬಳಸಲಾಗುತ್ತಿದ್ದ ರಾಸಾಯನಿಕ ಸಂಸ್ಕರಣ ಪದ್ದತಿಗೂ ತಿಲಾಂಜಲಿ ನೀಡಲಿದ್ದಾರೆ. ( ಇದನ್ನು ಎಂಬಾಲ್ಮಿಂಗ್ ಎಂದು ಕರೆಯುತ್ತಾರೆ)ಚರ್ಚುಗಳಿಂದ ಬಂಧುಗಳು ಸ್ನೇಹಿತರು ತಮ್ಮ ಸ್ವಂತ ಖರ್ಚಿನಲ್ಲಿ ಸ್ಮಾಶನಕ್ಕೆ ಬರುವಂತಾಗಿದೆ. ಕಾರಣ ಈ ಪ್ರತ್ಯೇಕವಾದ ವಾಹನಗಳ ಖರ್ಚು ಕಡಿಮೆ ಮಾಡುವಲ್ಲಿ ಈ ಪ್ರಯತ್ನ.