ಬೆಂಗಳೂರು ಮಹಾನಗರಪಾಲಿಕೆಯ ಗೊಂದಲದ ನೂತನ ತೆರಿಗೆ ನೀತಿ ಪರಿಹಾರಕ್ಕೆ ಮಾಜಿ ಮಹಾ ಪೌರ ಶ್ರೀ ರಮೇಶ್ ರವರ ಅನುಭವ ಹಾಗು ಅನಿಸಿಕೆ ಇಂದಿನ ಗೊಂದಲಕ್ಕೆ ಸೂಕ್ತ ಪರಿಹಾರ. ಮಹಾಪೌರರಾಗಿ ರಮೇಶ್ ರವರು ಬೆಂಗಳೂರು ಜನತೆಯ ನಾಡಿಮಿಡಿತವನ್ನು ಚನ್ನಾಗಿ ಬಲ್ಲವರು. ಬೆಂಗಳೂರು ಮಹಾನಗರ ಈಗ ಬೃಹದಾಕಾರವಾಗಿ ಬೆಳದು ಜಗತ್ತಿನ ಬಹು ದೊಡ್ಡ ವಾಣಿಜ್ಯ ನಗರಿಯೂ ಆಗಿ ಪ್ರಪಂಚದಾದ್ಯಂತ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಗರ ಮಹಾಪಾಲಿಕೆ ಈ ವಾಣಿಜ್ಯ ವರ್ಗದಿಂದ ಬಹುಪಾಲು ತೆರಿಗೆಯನ್ನು ಪಡೆಯುವಲ್ಲಿ ಪ್ರಯತ್ನಿಸುವುದು ಸೂಕ್ತವೆನ್ನಿಸುತ್ತದೆ. ನಗರ ನಿವಾಸಿಗಳ ಆಸ್ತಿ ತೆರಿಗೆಯ ವಿಷಯದಲ್ಲಿ ರಮೇಶ್ ರಂತಹವರ ಮಾರ್ಗದರ್ಶನ ನಿಜಕ್ಕೂ ಪಾಲಿಕೆಗೆ ಒಂದು ದಿಕ್ಸೂಚಿ ಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರಕಾರ ಈ ಬಗ್ಗೆ ಪಕ್ಷ ಭೇದ ಮರೆತು ಚಿಂತಿಸಬೇಕಾಗಿದೆ. ಪಾಲಿಕೆಯ ನಿರಂತರ ಆದಾಯದ ಬಗ್ಗೆ ರಾಜ್ಯದ ಹಣಕಾಸಿನ ಮತ್ರಿಯೂ ಆಗಿರುವ ಮುಖ್ಯ ಮಂತ್ರಿ ಯಡಿಯೂರಪ್ಪನವರು ಚಿಂತುಸುವರೆ?
ಸೋಮವಾರ, ಜನವರಿ 5, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ